Slide
Slide
Slide
previous arrow
next arrow

ಮನೆಯ ಬಳಿ ಬಂದಿದ್ದ ಹೆಬ್ಬಾವು ಮರಳಿ ಕಾಡಿಗೆ

300x250 AD

ಹೊನ್ನಾವರ: ಮುಗ್ವಾ ಗ್ರಾಮದ ಆರೋಳ್ಳಿ ಸಮೀಪ ಚಂದ್ರು ಗೌಡ ಎನ್ನುವವರ ಮನೆಯ ಗಿಡದಲ್ಲಿ ತೆಕ್ಕೆ ಹಾಕಿಕೊಂಡು ಮಲಗಿದ್ದ ಹೆಬ್ಬಾವೊಂದನ್ನು ಉರಗ ರಕ್ಷಕ ನಾಗರಾಜ ಶೇಟ್ ಕರ್ಕಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಗುರುವಾರ ಮುಂಜಾನೆ ಚಂದ್ರು ಗೌಡ ಅವರ ತೋಟದ ಗಿಡ ಒಂದರಲ್ಲಿ ಕಾಗೆಗಳು ಮುತ್ತಿಕೊಂಡು ಕೂಗುತ್ತಿರುವುದನ್ನು ಹತ್ತಿರ ಹೋಗಿ ನೋಡಲಾಗಿ ಹೆಬ್ಬಾವು ತೆಕ್ಕೆ ಹಾಕಿ ಮಲಗಿರುವುದು ಪತ್ತೆಯಾಯಿತು. ಹೆಬ್ಬಾವು ಸುಮಾರು 8 ಅಡಿ ಉದ್ದ, 13 ಕೆ.ಜಿ ಗೂ ಮೀರಿದ ಭಾರ ಹೊಂದಿತ್ತು. ಪ್ರಯಾಸದಿಂದ ಅದನ್ನು ಹಿಡಿದು ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ.

300x250 AD
Share This
300x250 AD
300x250 AD
300x250 AD
Back to top